Thursday, 27 April 2017

Earning while learning





Is ‘Earning while learning’ a humiliating affair for family? Also, are our celebrities’ words and lives taken so seriously by young minds? 
Today morning I had to witness an angry father and innocent son’s brawl. Upon opening the door I saw Deepak, our car washing guy, a B.Com student, who earns his pocket money by washing cars in the evening. 
Anxious Deepak said “Aunty, I will not come from tomorrow. My father wants to talk to you.” 
"Come on man… you borrowed Rs. 2000 just yesterday and now you want to leave...", I wanted to grumble. Suddenly I saw a well-dressed , middle aged man emerging from a car outside. He furiously opened the gate, handed over the pink note to me, and in the next moment gave two tight slaps on Deepak's face.
I was totally confused… The man declared, “I own a travel agency, and also some agricultural land in Kanakapura. I pay 1 lac per month as salaries, and look at this fool... I could have given him enough money. But secretly he is washing cars for money. Does he care about my prestige...?
I interrupted, "Sir... It is fine.. He is a good boy…He was into earning. Not a big deal… Please don’t hurt him. If you don’t like it, you can ask him to stop. "
I asked Deepak, "Why did you work against your father’s wish?"
“Aunty, in ‘WEEK END WITH RAMESH’ T. V. show, I often see people who were struggling in life yet supported themselves and grew up to become celebrities.. So even I wanted to be independent and prove myself…” Innocent Deepak’s eyes filled with tears…
I was speechless.

Friday, 7 April 2017

Don’t say my child is mild’ - The issue is development of self


Don’t say my child is mild’ - The issue is development of self
[Experiential outcome of a councillor  ]
 Pages  -86 , Price - Rs. 75
Written by - Dr. Chandrashekhara Damle
This book is available at  Sapna Book House Bangalore. 

and  also at  Sadhana Prakashana, Bangalore.  Phone: 8197731986

“ The main cause of the worries of the parents could be reduced to the MISMATCH  between the   ACTUAL ABILITIES   of the child and the ABILITIES EXPECTED  by the parents..”
I came across these valuable words expressed by Dr. Chandrashekhara  Damle in his newly published book ‘ DON’T SAY MY CHILD IS MILD’. The tagline ‘The issue is development of self ’, aptly conveys the summery of the book.
This book is an incredible work of  Dr. Damle,-  an ideal teacher and the founder of  an extraordinary  institution  ‘Sneha School, Sullia, DK Dist, Karnataka’. Having 35 years of profound experience in the field of teaching, he is honoured with ‘ASAMANYA  KANNADIGA - 2015 ’award  by Suvarna media channel. He is a resource person for Yakshagana  a folk performing art of Karnataka.
 In the advent of globalisation, our households are opting to have only one child. There is a huge gap between the childhood experiences of the parents and the environment they provide to their children. They shower them with all kinds of luxuries, extra care and expect children to be the most intelligent ones in their social circle.
Many a times they want to pursue their unfulfilled dreams of life through their dearest child. When the effort gets flopped parents transfer the blame to the school, teachers and inefficient education system. In due course of time the child also tends to carry similar views, finally hampering the growth of the child as an innovative and self-reliant human being.
In this process, qualities of competitive spirit, endurance, sense of hard work, being empathetic to classmates takes back seat. Child grows being manipulative, reacts aggressively and sheepishly towards the real life situations.
  Dr. Damle has analysed the real life case histories of  10 unusual students [along with their parents], who became normal  after the counselling  sessions by him. He explains the need of healthy communication between parents , children and teachers.  He also strongly recommends success of the educational  process of the child is  purely dependent  on the commitment and expertise of teachers and  parents.
This is a ‘must read’ book for young parents, teachers and counselling practitioners around the globe. We expect many more books from Dr. Damle in future to brighten up the thought process of young parents, teachers and councillors.

Monday, 6 March 2017

All is well


Are teachers are the most powerful creatures under the sun? Answer would be YES... because they can change anything... Look at this…

On parent- teacher meeting day, as soon as the class teacher says “we are concerned about your child’s academic performance. He/ she must work hard …. Especially in maths….” , that perfect family - confident dad, stylish super mom and enthusiastic teenager turns into desperate father, sobbing mother and grumbling child within no time.

 Parent- Oh… He/she is the sole purpose of my life. I sacrifice everything for children… I work from early morning till late-night… I did this… I did that…. I… I… I…

Teenage Child - They irritate me for every single thing … I agree I haven’t done well in this test but my last exam scores were awesome… Yes I am attached to gadgets… But I too need a social life…. And there are these teenage hormones which make me daydream… So it is not my fault after all…

Is it the wakeup call before our so called solid families collapse? Can we as parents stop using the word ‘sacrifice’ for the adjustments we make for self? Can we accept the fact that children are part of our life but not the sole purpose? Have you ever given a thought before providing the luxurious facilities to the child?  Oh dear emotional mothers… he has come out of your womb long ago, can you consider your child as a separate individual.

O my dearest children, do you know that there is cut throat competition awaiting you out there? Do you know that no one cares your excuses for bad academic performance? Do you know that till you get into a right college you are recognised by your marks card not by your passion and all that imported stuff…?


Wishing you all the best for the forthcoming exams!

Wednesday, 11 January 2017

ತಲೆಮಾರುಗಳ ತಲೆಬಿಸಿ - Generation gap


ಈ ಜಗತ್ತಿನಲ್ಲಿ ಅಥವಾ ನಮ್ಮ ಜೀವನದಲ್ಲಿ ನಮ್ಮ ನಿಯಂತ್ರಣಕ್ಕೆ ಮೀರಿದ ಸಂಗತಿ ಯಾವುದು? ನನ್ನ ಈ ಯಕ್ಷಪ್ರಶ್ನೆಗೆ ನಿಮ್ಮ ತಲೆ ಉಪಯೋಗಿಸಿ ಉತ್ತರಿಸಿ . ನಿಮ್ಮ ಉತ್ತರ ಬೆಲೆಯೇರಿಕೆ, ಹವಾಮಾನ, ಹುಟ್ಟು- ಸಾವು, ಸುಖ-ದು:ಖ.... . ಹೌದು ಒಪ್ಪಿದೆ.. ಹಾಗಿದ್ದರೂ ನನ್ನ ಪ್ರಕಾರ ಇವುಗಳಲ್ಲಿ ಕೆಲವನ್ನು ದುಡ್ಡಿದ್ದರೆ, ಇಚ್ಛಾಶಕ್ತಿ ಇದ್ದರೆ ನಿಯಂತ್ರಿಸಬಹುದು.  ಆದರೆ ನಮ್ಮ ನಿತ್ಯಜೀವನದಲ್ಲಿ ನಮ್ಮ ಸಂಬಂಧಗಳಿಗೆ ಹುಳಿ ಹಿಂಡುವ, ನಮಗೆ ತಲೆಚಿಟ್ಟು ಹಿಡಿಸುವ ’ಜನರೇಶನ್ ಗ್ಯಾಪ್ ’ ಅನ್ನೋದು ನಿರಂತರವಾದದ್ದು, ನಿಯಂತ್ರಣಕ್ಕೆ ಮೀರಿದ್ದು ಅಂತ ಹೇಳಿದರೆ ನೀವು ಒಪ್ಪುತ್ತೀರಿ ಅನ್ನುವ ದೃಢವಿಶ್ವಾಸ ನನ್ನದು. ಜನರೇಶನ್ ಗ್ಯಾಪ್ ಅಥವಾ ತಲೆಮಾರುಗಳ ಅಂತರ ಎಂದರೆ ಯಾವುದೇ ವಿಚಾರದ ಬಗ್ಗೆ ವಿವಿಧ ವಯೋಮಾನದ ವ್ಯಕ್ತಿಗಳಲ್ಲಿ ಕಾಣುವ ಅಭಿಪ್ರಾಯಭೇದ. ಸುಲಭವಾಗಿ ಹೇಳುವುದಾದರೆ ಅಪ್ಪ-ಅಮ್ಮನ ಅಭಿಪ್ರಾಯ ಮಕ್ಕಳಿಗೆ ಸರಿಬರಲ್ಲ. ಟೀಚರ್ ಹೇಳಿದ್ದು ವಿದ್ಯಾರ್ಥಿಗಳಿಗೆ ಆಗಲ್ಲ. ವಯಸ್ಸಾದ ಬಾಸ್ ನ ಮಾತು ಯುವ ಉದ್ಯೋಗಿಗಳಿಗೆ ನಗು ತರಿಸುತ್ತದೆ. 

ಈ ವಿಷಯದ ಬಗ್ಗೆ ಅತ್ಯಂತ ನಿಖರವಾಗಿ ಹೇಳುವ ಯೋಗ್ಯತೆ ಇರುವ ಕೆಲವು ವ್ಯಕ್ತಿಗಳಲ್ಲಿ ನಾನೂ ಒಬ್ಬಳು ಅಂತ ಆತ್ಮವಿಶ್ವಾಸದಿಂದ ಹೇಳಬಲ್ಲೆ. ಏನಪ್ಪಾ... ಇವಳಿಗೆ ಇಷ್ಟೊಂದು ದುರಹಂಕಾರ/ ಕೊಬ್ಬು... ಅಂತೆಲ್ಲಾ ತಪ್ಪು ತಿಳೀಬೇಡಿ. ನನ್ನ ತಂದೆ-ತಾಯಿ ’ಮಕ್ಕಳಿರಲವ್ವ ಮನೆತುಂಬ ’ ಅಂತ ನಂಬಿದವರು. ಅದಕ್ಕೆ ಕಾರಣ  ಸಾಂಪ್ರದಾಯಿಕ ಮನೋಭಾವವೋ, ಅಜ್ಞಾನವೋ, ಉಪೇಕ್ಷೆಯೋ ನನಗೆ ಗೊತ್ತಿಲ್ಲ. ನನ್ನ ತಂದೆ ನಾನು ಹುಟ್ಟಿದ ವರ್ಷದೊಳಗೆ ಕಾಲವಾದರು. ಆದ್ದರಿಂದ ನನ್ನ ಸಂಘರ್ಷ ತಾಯಿಯೊಡನೆ ಮಾತ್ರ. ಮನೆಯಲ್ಲಿ ಊಟ-ತಿಂಡಿ, ಪ್ರೀತಿ-ವಾತ್ಸಲ್ಯಗಳಿಗೆ ಕೊರತೆಯಿಲ್ಲದಿದ್ದರೂ ನನಗೆ ಬುದ್ಧಿ ಬರುತ್ತಿದ್ದಂತೆಯೇ, ನನ್ನ ಗೆಳತಿಯರು ಅವರ ತಂದೆ-ತಾಯಂದರ ಬಗ್ಗೆ , ಚಿಕ್ಕ-ಸುಖೀ ಕುಟುಂಬದ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದರೆ ’ನಂದ್ಯಾಕೋ ಸ್ವಲ್ಪ ಸರಿಯಿಲ್ಲ’ ಅಂತ ಅನಿಸುತ್ತಿತ್ತು.ನಾವಿಬ್ಬರೂ ಜೊತೆಗೆ ಹೋಗುತ್ತಿದ್ದರೆ “ ಓ ನಿಮ್ಮ ಮೊಮ್ಮಗಳಾ?”  ಎಂಬ ಪ್ರಶ್ನೆ ತಾಯಿಗೆ ಎದುರಾಗುತ್ತಿತ್ತು. ಅದೇನೂ ಅಂಥ ದೊಡ್ಡ ವಿಚಾರವಲ್ಲ, ನಾವು ಬದುಕುವುದು ನಮಗೋಸ್ಕರ-ಜನರನ್ನು ಮೆಚ್ಚಿಸಲು ಅಲ್ಲವಲ್ಲ. ಆದರೆ ನನ್ನ ಹಾಗೂ ನನ್ನ ತಾಯಿಯ ವಿಚಾರಗಳಲ್ಲಿ,ನಂಬಿಕೆಗಳಲ್ಲಿ ಅಗಾಧ ವ್ಯತ್ಯಾಸ ಸಮಸ್ಯೆಯಾಗಿ ಕಾಡುತ್ತಿತ್ತು. ನನ್ನ ಉಡುಗ-ತೊಡುಗೆ, ಓದು, ಮನೆಕೆಲಸ, ಹವ್ಯಾಸಗಳು, ಭವಿಷ್ಯದ ಗುರಿಗಳು, ಕನಸುಗಳು ಯಾವುದೂ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಅವರು ಮಾತುಗಳನ್ನು ಕೇಳಿದರೆ ನನಗೆ ಕೋಪ ಬರುತ್ತಿತ್ತು.
ಮುಂದೆ ನಾನು ತಾಯಿಯಾದಾಗ ನಿರ್ಧಾರ ಮಾಡಿಬಿಟ್ಟೆ. ನನಗೂ ನನ್ನ ಮಕ್ಕಳಿಗೂ ಈ ಸಮಸ್ಯೆ ಬರಬಾರದು... ಬರಲು ಸಾಧ್ಯವೇ ಇಲ್ಲ... ಏಕೆಂದರೆ ನಾನೊಬ್ಬ ಬುದ್ಧಿವಂತ ತಾಯಿ ಎಂಬ ಅಹಂಕಾರವೂ ಇತ್ತೆನ್ನಿ . ಅದಕ್ಕಾಗಿ ಆದಷ್ಟು ಮಟ್ಟಿಗೆ ನನ್ನನ್ನು ಅಪ್ ಡೇಟ್ ಮಾಡಿಕೊಂಡೆ. ಆದರೆ ವರ್ಷಗಳು ಉರುಳುತ್ತಿದ್ದಂತೆಯೇ ಯಾಕೋ ಆಗಾಗ -
 “ಅಮ್ಮಾ  ....., ಅಷ್ಟೂ ಗೊತ್ತಾಗಲ್ವ?
ನಿನ್ನದು ಬ್ರಿಟಿಷ್ ಇಂಗ್ಲೀಷ್ ಆಕ್ಸೆಂಟ್ ನಮ್ಮದು ಅಮೇರಿಕನ್ ಆಕ್ಸೆಂಟ್...
 ನನ್ನನ್ನು ಯಾಕೆ ಕೇಳೋದು ಗೂಗಲ್ ನಲ್ಲಿ ನೋಡು ನಿನಗೇ ತಿಳಿಯುತ್ತದೆ....
 ಕಮ್ ಆನ್ ...ಅಮ್ಮ... .. ಲೆಟ್ಸ್ ಹಾವ್ ಫನ್...
 ಸೋ..ವಾಟ್... ಚೇಂಜ್ ಯುವರ್  ಔಟ್ ಲುಕ್ ”
 ಇತ್ಯಾದಿ ವಾಕ್ಯಗಳು ನನ್ನ ಕಿವಿಯನ್ನು ಅಪ್ಪಳಿಸಲಾರಂಭಿಸಿದವು. ನಾನೂ ಒಂದು ಕಾಲದಲ್ಲಿ ಇಂಥದೇ ಅರ್ಥಬರುವ ವಾಕ್ಯಗಳನ್ನು ಉಪಯೋಗಿಸಿದ ನೆನಪು ಕಾಡಲಾರಂಭಿಸಿದಾಗ ನನ್ನ ತಾಯಿ ನೆನಪಾದಳು. ಅದರೆ ನನಗೂ ನನ್ನ ಮಕ್ಕಳಿಗೂ ವಯಸ್ಸಿನ ಅಂತರ ಜಾಸ್ತಿಯೇನಿಲ್ಲವಲ್ಲ...ಈ ಜಾಣೆತಾಯಿಗೆ ಯಾಕೆ ಸೋಲು ಎದುರಾಯಿತು? ಎಂದೆಲ್ಲ ಯೋಚಿಸಿದಾಗ  ನನಗೆ ಜೀವನ ಅರ್ಥವಾಯಿತು. ನನ್ನ ತಾಯಿಯ ಬಗ್ಗೆ ಇನ್ನಿಲ್ಲದ ಗೌರವ ಹುಟ್ಟಿತು.
ಹೌದು ಜನರೇಶನ್ ಗ್ಯಾಪ್ ಆನ್ನುವುದು ಶಾಶ್ವತ .ಅದನ್ನು ಇಲ್ಲವಾಗಿಸಲು ಅಸಾಧ್ಯ ಡಯಾಬಿಟೀಸ್ ನಂತೆ, ಆದರೆ ಹದ್ದುಬಸ್ತಿನಲ್ಲಿ ಇಡಬಹುದು. ಹದಿಹರೆಯದ, ಅತ್ಯಾಧುನಿಕ ಮಕ್ಕಳ ಜೊತೆ ದಿನವೂ ಏಗುತ್ತಾ , ಪ್ರಾಚೀನತೆಯ ಪ್ರತೀಕವಾದ ಸಂಸ್ಕೃತದ ಶಿಕ್ಷಕಿಯ ಕೆಲಸ ಮಾಡುವ ನನಗೆ ಜನರೇಶನ್ ಗ್ಯಾಪ್ ನ ಉರಿ ಆಗಾಗ ತಟ್ಟುತ್ತಿರುತ್ತದೆ. ಹಾಗಾಗಿ ಈ ತಲೆಮಾರುಗಳ ತಲೆಬಿಸಿಯನ್ನು ಕಡಿಮೆ ಮಾಡುವ ಕೆಲ ವಿಧಾನಗಳನ್ನು ಕಂಡುಕೊಂಡು ನೆಮ್ಮದಿಯಾಗಿರಲು ಪ್ರಯತ್ನಿಸುತ್ತಿರುತ್ತೇನೆ. ಓದಿ, ನಿಮಗೂ ಸರಿಯೆನಿಸಿದರೆ ಪಾಲಿಸಬಹುದು.
·         ದಿನವೂ ತಪ್ಪದೇ ದಿನಪತ್ರಿಕೆಯನ್ನು ಓದಿ. ಆಗಾಗ ಸಿನಿಮಾ ನೋಡಿ. ಪ್ರಪಂಚದ ಆಗುಹೋಗುಗಳು ನಿಮಗೆ ತಿಳಿದಾಗ ಯುವಜನರ ನಡವಳಿಕೆಗಳು ವಿಚಿತ್ರ ಅನಿಸುವುದಿಲ್ಲ.
·         ಮಕ್ಕಳು ಏನಾದರೂ ಸಲಹೆ ನೀಡಿದಾಗ ತಕ್ಷಣ ನಿರಾಕರಿಸಬೇಡಿ. ನೋಡೋಣ.. ಯೋಚನೆ ಮಾಡುತ್ತೇನೆ.. ಅನ್ನಿ. ಸಂದರ್ಭ, ಅವಕಾಶಗಳನ್ನು ನೋಡಿಕೊಂಡು ಚುಟುಕಾಗಿ ಆದರೆ ದೃಢವಾಗಿ ನಿಮ್ಮ ಅಭಿಪ್ರಾಯವನ್ನು ಸೂಚಿಸಿ.
·         ನಮ್ಮ ಕಾಲದಲ್ಲಿ ಐದು ರೂಪಾಯಿಗೆ ಒಂದು ಕೆ.ಜಿ ಅಕ್ಕಿ ಸಿಗುತ್ತಿತ್ತು. ಈಗ ಏನ್ ಕಾಲ ಬಂತಪ್ಪಾ.... ಎನ್ನುತ್ತಾ ಹಳೆಯ ಕಾಲದ ಬೆಲೆಗಳನ್ನು ಇಂದಿನ ಬೆಲೆಗಳಿಗೆ ಹೋಲಿಸುವ ಅಸಂಬದ್ಧ ಪ್ರಲಾಪವನ್ನು ನಿಲ್ಲಿಸಿ.ಅದರಿಂದ ಏನೂ ಉಪಯೋಗವಿಲ್ಲ.
·         ಸಂಪ್ರದಾಯ, ಜಾತಿ, ಮದುವೆಯ ಬಗ್ಗೆ ಮಕ್ಕಳ ಅಭಿಪ್ರಾಯಗಳು ಶಾಲಾಶಿಕ್ಷಣದ ಪ್ರಭಾವದಿಂದ ರೂಪುಗೊಂಡಿವೆ. ಮನೆಯಿಂದ ಹೊರಗೆ ಕಾಲಿಡುತ್ತಿದ್ದಂತೆಯೇ ’ಎಲ್ಲರೂ ಸಮಾನರು ’ ಎಂಬ ತತ್ವ ಅನುಸರಿಸುವ ಮಕ್ಕಳು ಮನೆಯೊಳಗೆ  ’ನಾವು ಮಾತ್ರ ಶ್ರೇಷ್ಠರು ’ ಎಂಬುದನ್ನು ಒಪ್ಪಲಾರರು. ಅಲ್ಲದೆ ಕೆಲವು ಸಾಂಪ್ರದಾಯಿಕ ಆಚರಣೆಗಳನ್ನು ಇಂದಿನ ಜೀವನಶೈಲಿಯಲ್ಲಿ ಅನುಸರಿಸುವುದು ಕಷ್ಟಸಾಧ್ಯ. ಆದ್ದರಿಂದ ನಿಮ್ಮ ನಿಲುವುಗಳನ್ನು ಮಕ್ಕಳು ಗೌರವಿಸದಿದ್ದರೆ ಕೂಗಾಡುವುದರಿಂದ ಪ್ರಯೋಜನವಿಲ್ಲ. ಶಾಂತಚಿತ್ತದಿಂದ ತಿಳಿಹೇಳಲು ಪ್ರಯತ್ನಿಸಿ.ಅವರು ಕೇಳದಿದ್ದರೆ ಸಾಧ್ಯವಾದಷ್ಟು ಮಟ್ಟಿಗೆ ಅಡ್ಜಸ್ಟ್ ಮಾಡಿಕೊಳ್ಳಿ. ಮನ:ಶಾಂತಿಯ, ಪ್ರೀತಿ-ವಿಶ್ವಾಸದ ಸಂಬಂಧಗಳ ಮುಂದೆ ಸಂಪ್ರದಾಯ, ಜಾತಿಗಳು ಅಮುಖ್ಯ.
·         “ಈಗಿನ ಮಕ್ಕಳು ತಂದೆತಾಯಿಯರನ್ನು ಎಲ್ಲಿ ನೋಡ್ಕೋತಾರೆ? ”ಎಂದು ಮೂಗು ಮುರಿಯುತ್ತಾ ವೃದ್ಧಾಶ್ರಮದ ಬಗ್ಗೆ ಮಕ್ಕಳ ಮುಂದೆ ಮಾತನಾಡಬೇಡಿ. ನಮ್ಮ ಆಧುನಿಕ ಜೀವನ ನಮಗೆ ಅನೇಕ ಸುಖಗಳನ್ನು ಕೊಟ್ಟಿದೆ.ಹಾಗೆಯೇ ಕೆಲ ಸವಾಲುಗಳನ್ನು ಕೂಡಾ. ಏಕಾಂಗಿಯಾಗಿ ವೃದ್ಧಾಪ್ಯವನ್ನು ಎದುರಿಸುವ ಅನಿವಾರ್ಯತೆ ಬರಬಹುದು. ಅದಕ್ಕಾಗಿ ಒಳ್ಳೆಯ ಆರೋಗ್ಯ,ಸಾಕಷ್ಟು ಹಣದ ಜೊತೆ ತಯಾರಾಗೋಣ. ಗೊಣಗಾಟ ಬೇಡ.
·         ಯುವಕರ ಜೊತೆ ಮಾತನಾಡುವಾಗ ನಿಮ್ಮ ಹಳೆಯ ಕಠಿಣ ಜೀವನಶೈಲಿಯನ್ನು, ನಿಮ್ಮ ಆದರ್ಶ ಜೀವನಧ್ಯೇಯಗಳನ್ನು ಅತಿಯಾಗಿ ಹೇಳಬೇಡಿ.ಅವರಿಗೆ ಅದು “ ಬೋರಿಂಗ್” ಅನಿಸುತ್ತದೆ. ಯಾಕೆಂದರೆ ಅಂಥ ಜೀವನದ ಕಲ್ಪನೆ ಕೂಡಾ ಅವರಿಗೆ ಇರುವುದಿಲ್ಲ. ಅವರಿಗದು ಬೇಕಾಗೂ ಇಲ್ಲ. ಅವರು ಬೇರೊಂದು ಕಾಲಘಟ್ಟದಲ್ಲಿ ಬದುಕುತ್ತಿದ್ದಾರೆ.
·          “ನನಗದು ಬರುವುದಿಲ್ಲ... ಕಲಿಯಲು ಇಷ್ಟವಿಲ್ಲ... ನನ್ನ ಜೀವನ ಮುಗಿಯುತ್ತಾ ಬಂತು ನಾನ್ಯಾಕೆ ಕಲೀಬೇಕು.... ಅನ್ನುವ ಪಲಾಯನವಾದವನ್ನು ಬಿಡಿ. ಇದು ತಂತ್ರಜ್ಞಾನದ ಯುಗ. ಸಾಯುವ ಗಳಿಗೆಯವರೆಗೂ ಕಲಿಯದೇ ವಿಧಿಯಿಲ್ಲ.

ಯುವಜನರ ಜೊತೆ ಮನಸ್ತಾಪವಿಲ್ಲದೆ ಬದುಕಲು ನಾವು ಎರಡು ಹೆಜ್ಜೆ ಮುಂದಿಡುವುದು ಅತ್ಯಗತ್ಯ. ಆಗ ಅವರು ಕೂಡಾ ನಮ್ಮೊಡನೆ ನಡೆಯಲು ಮನಸ್ಸು ಮಾಡುತ್ತಾರೆ. ಜೊತೆ ಜೊತೆಗೆ ಎರಡು ಜನರೇಶನ್ ಗಳು ನಡೆಯುವಾಗ ಗ್ಯಾಪ್ ಇರಲು ಹೇಗೆ ಸಾಧ್ಯ ಅಲ್ಲವೇ?

Thursday, 29 December 2016

ಚಿನ್ನದೂರು - ಜೈಸಾಲ್ಮೇರು

 ಚಿನ್ನದೂರು - ಜೈಸಾಲ್ಮೇರು

      ದೃಷ್ಟಿ ಹಾಯಿಸಿದಷ್ಟು ದೂರ ಮರಳಿನದೇ ಸಾಮ್ರಾಜ್ಯ. ಅಲ್ಲಲ್ಲಿ ಜಾಲಿಮರಗಳ ಹಸಿರು. ನಟ್ಟನಡುವೆ ಗವ್ವೆಂದು ಮೈಚಾಚಿ ಮಲಗಿರುವ ಕಪ್ಪು ರಸ್ತೆಯ ಮೇಲೆ ಶರವೇಗದಲ್ಲಿ ಧಾವಿಸುವ ವಾಹನಗಳು.ಆ ಬಿರುಬಿಸಿಲಿನಲ್ಲೂ ತನಗೂ ಇದಕ್ಕೂ ಏನೂ ಸಂಬಂಧವಿಲ್ಲವೆಂಬಂತೆ ಒಡೆಯನೊಡನೆ ನಡೆಯುತ್ತಿರುವ ಒಂಟೆಗಳು... ಹೌದು ಈ ದೃಶ್ಯವೈಭವ ಅನಾವರಣಗೊಂಡದ್ದು ಜೈಸಲ್ಮೇರ್ ಎಂಬ ಸುವರ್ಣನಗರಿಯಲ್ಲಿ.
ಜೈಸಲ್ಮೇರ್ ಭಾರತದ ಪಶ್ಚಿಮದ ಗಡಿಯ ಕೊನೆಯ ನಗರ. ಥಾರ್ ಮರುಭೂಮಿಯ ನಟ್ಟನಡುವೆ ಇರುವ ಈ ನಗರದಿಂದ ೧೦೦ ಕಿ.ಮೀ ಸಾಗಿದರೆ ಭಾರತ-ಪಾಕ್ ಗಡಿ ಆರಂಭವಾಗುತ್ತದೆ.ವಿಶ್ವಪರಂಪರೆಯ ತಾಣವೆಂದು ಘೋಷಿತವಾಗಿರುವ ಜೈಸಲ್ಮೇರ್ ರಾಜಸ್ತಾನದ ರಾಜಧಾನಿ ಜೈಪುರದಿಂದ ೫೭೫ಕಿ.ಮೀ ಪಶ್ಚಿಮಕ್ಕಿದೆ. ಮರಳುಗಾಡಿನ ಈ ನಗರದಲ್ಲಿ  ಸಹಜವಾಗಿಯೇ ಮಳೆಯಿಲ್ಲ, ನೀರಿಲ್ಲ, ಕೃಷಿ- ಹೈನುಗಾರಿಕೆ ಅಪರೂಪ ,ದೊಡ್ಡ ಕೈಗಾರಿಕೆಗಳಿಲ್ಲ... ಆದರೆ ಈ ಜನರನ್ನು ನೋಡಿ. ಇಲ್ಲಗಳ ನೆಪವೊಡ್ಡಿ ಕೈಚೆಲ್ಲಿ ಕುಳಿತಿಲ್ಲ ಅವರು.ತಮ್ಮಲ್ಲಿರುವ ಮೈ ನವಿರೇಳಿಸುವ ಸಂಗೀತ-ನೃತ್ಯ ಪರಂಪರೆ,ಅದ್ಭುತವಾದ ಕಸೂತಿ ಕಲೆ ಮತ್ತು ಭಾರತದಲ್ಲಿ ಎಲ್ಲೂ ಕಾಣದ ವಿಶಾಲವಾದ ಮರುಭೂಮಿಯನ್ನೇ ಬಂಡವಾಳವಾಗಿರಿಸಿಕೊಂಡು ಪ್ರವಾಸೋದ್ಯಮವೆಂಬ ಏಕೈಕ ಆಸರೆಯನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಮರುಭೂಮಿಯಲ್ಲಿ ಟೆಂಟುಗಳನ್ನು ನಿರ್ಮಿಸಿ ಅಲ್ಲೊಂದು ದಿನ ಕಳೆದು ಸಂತಸಪಡಿ ಎಂದು ಪ್ರವಾಸಿಗರನ್ನು ಆದರದಿಂದ ಸ್ವಾಗತಿಸುತ್ತಾರೆ.
                                                      ಟೆಂಟ್ ಹೋಟೇಲ್
                 
            ಅಚ್ಚಬಿಳಿಬಟ್ಟೆಯಿಂದ ,ದೃಢವಾದ ಬಿಳಿಹಗ್ಗ ಬಳಸಿ ನಿರ್ಮಿಸಿದ ಟೆಂಟುಗಳು ಜೈಸಲ್ಮೆರ್ ಪ್ರವೇಶಿಸುತ್ತಿದ್ದಂತೆಯೇ ನಿಮಗೆದುರಾಗುತ್ತವೆ. ಊಟ-ತಿಂಡಿಯ ಉಪಚಾರವೂ ಇರುವ ಟೆಂಟ್ ಹೋಟೆಲ್ ಎಂದು ಕರೆಯಬಹುದಾದ ಇಲ್ಲಿ ವೃತ್ತಾಕಾರದಲ್ಲಿ ಸುಮಾರು ೨೦ ರಿಂದ ೩೦ ಟೆಂಟುಗಳಿರುತ್ತವೆ. ಸಿಮೆಂಟಿನ ಅಡಿಪಾಯದ ಮೇಲೆ ಬಟ್ಟೆಯೇ ಗೋಡೆಗಳಾಗಿ ಕಟ್ಟಿರುವ ಪ್ರತಿ ಟೆಂಟಿನ ನಡುವೆ ಐದು ಅಡಿಯ ಅಂತರ. ಮುಂದುಗಡೆ ಎರಡು ಕುರ್ಚಿಗಳಿರಿಸಬಹುದಾದ ಪುಟ್ಟ ಜಗಲಿ. ಬಟ್ಟೆಯ ಬಾಗಿಲನ್ನು ಸರಿಸಿ ಒಳಗಡೆ ಹೋದರೆ ಅಚ್ಚುಕಟ್ಟಾಗಿ ಎರಡು ಮಂಚಗಳು, ಒಂದು ಮೇಜು, ಒಂದು ದೀಪ, ಟೇಬಲ್ ಫಾನ್ ಗಳ ಸ್ವಾಗತ. ಮತ್ತೊಂದು ಬಟ್ಟೆಯ ಬಾಗಿಲನ್ನು ಸರಿಸಿ ಸ್ನಾನಕ್ಕೆ- ಶೌಚಕ್ಕೆ ವ್ಯವಸ್ಥೆ! ಅಕ್ಟೋಬರ್ ತಿಂಗಳಲ್ಲಿ ನಾನು ಹೋದಾಗ ಅತ್ಯಂತ ಹಿತಕರ ಹವೆ ಇತ್ತು. ಮಧ್ಯಾಹ್ನ ರುಚಿಯಾದ ರಾಜಸ್ತಾನೀ ಶೈಲಿಯ ಊಟ ಮುಗಿಸಿ ಹಾಗೆ ಅಡ್ಡಾದೆ.ಮಂದವಾದ ಗಾಳಿ ಮುದನೀಡುತ್ತಿತ್ತು. ನಿದ್ದೆಯಿಂದ ಎದ್ದಾಗ ಸಾಯಂಕಾಲದ ಇಳಿಬಿಸಿಲು ಕಚಗುಳಿ ಇಡುತ್ತಿತ್ತು. ಹಾಗೇ ಹೊರಗಡೆ ಬಂದಾಗ ಒಂಟೆಗಳ ಒಡೆಯರು ಪ್ರವಾಸಿಗರಿಗಾಗಿ ಕಾಯುತ್ತಿದ್ದರು.ಇನ್ನೇಕೆ ತಡ ಎಂದುಕೊಂಡು ಪ್ರವಾಸಿಗಳ ಗುಂಪಿನೊಡನೆ ಒಂಟೆಯ ಬೆನ್ನೇರಿ ಹೊರಟೇಬಿಟ್ಟೆ. ಓಹ್... ಆ ಸುಖಕರ ಬಿಸಿಲಿನಲ್ಲಿ, ಸುಯ್ಯೆಂದು ಬೀಸುವ ಗಾಳಿಯೊಡನೆ, ಒಂಟೆ ಗಂಭೀರವಾಗಿ ಮರಳಿನ ದಿಬ್ಬಗಳ ಮೇಲೆ ನಡೆಯುತ್ತಿದ್ದರೆ ಮಜವೋ ಮಜಾ.. ಸುಮಾರು ದೂರ ಪ್ರವಾಸಿಗರನ್ನು ಕರೆದೊಯ್ದ  ಒಂಟೆಗಳ ಮಾಲೀಕರು ಪ್ರಶಸ್ತವಾದ ಸ್ಥಳವೊಂದರಲ್ಲಿ ಗುಂಪನ್ನು ಇಳಿಸಿದರು. ಆ ಎತ್ತರವಾದ ದಿಬ್ಬದ ಮೇಲೆ ಕಾಲು ಚಾಚಿ ಕುಳಿತುಕೊಂಡು, ಸೂರ್ಯ ದಿನದಪಯಣವನ್ನು ಮುಗಿಸಿ ಮರಳಸಮುದ್ರದಲ್ಲಿ ಮರೆಯಾಗುವ ಆ ಅದ್ಭುತದೃಶ್ಯವನ್ನು ನಾವೆಲ್ಲಾ ಕಣ್ತುಂಬಿಕೊಂಡೆವು. ಸ್ವಲ್ಪಹೊತ್ತು ಮರಳಲ್ಲಿ ಅಡ್ಡಾಡಿ ಟೆಂಟಿಗೆ ಮರಳಿದೆವು. 
ಸರಿ ರಾತ್ರಿಯಾಗುತ್ತಿದ್ದಂತೆಯೇ ಮಧ್ಯದಲ್ಲಿ ನಿರ್ಮಿಸಿದ ಬಯಲು ರಂಗಮಂದಿರದಲ್ಲಿ ಕಿನ್ನರಲೋಕವೊಂದು ಸೃಷ್ಟಿಯಾಯಿತು. ಕಲಾವಿದರ ತಂಡವೊಂದು ರಾಜಸ್ತಾನೀ ಜಾನಪದ ಸಂಗೀತ - ನೃತ್ಯದ ರಸದೌತಣವನ್ನು ನಮಗೆ ಉಣಬಡಿಸಿತು. ರಾತ್ರಿ ರುಚಿಕಟ್ಟಾದ ಊಟಮುಗಿಸಿ ಟೆಂಟಿನ ಜಗಲಿಯಲ್ಲಿ ಕುಳಿತುಕೊಂಡರೆ ಸುತ್ತಲೂ ನೀರವ ಮೌನ.. ಆಕಾಶದ ತುಂಬೆಲ್ಲಾ ಅಸಂಖ್ಯಾತ ತಾರೆಯರು... ಸುಖವಾಗಿ ಬೀಸುವ ಗಾಳಿ... ಯಾವುದೋ  ಬೇರೆಯೇ ಲೋಕದಲ್ಲಿರುವ ಅನುಭವ...
                                                    ಒಂಟೆಯ ಬೆನ್ನೇರಿ.


ಜೈಸಲ್ಮೆರ್, ಬಂದೇಜ್/ ಬಾಂಧನಿ  ಸೀರೆಗಳ ತವರೂರು. ಬೇಸಗೆಯಲ್ಲಿ ಇಲ್ಲಿ ಹೊರಗೆ ಕಾಲಿಡಲಾರದಂಥ ಬಿರುಬಿಸಿಲು.ಸಮಯ ಕಳೆಯಲು ಇಲ್ಲಿನ ಮಹಿಳೆಯರು ಆರಂಭಿಸಿದ ಹವ್ಯಾಸ ಇಂದು ಬೃಹತ್ ಉದ್ದಿಮೆಯಾಗಿ ಬೆಳೆದು ನಿಂತಿದೆ. ಬಿಳಿಬಟ್ಟೆಯನ್ನು ಅಲ್ಲಲ್ಲಿ ದಾರದಿಂದ ಕಟ್ಟಿ ಬಣ್ಣಗಳಲ್ಲಿ ಅದ್ದಿ ತೆಗೆದಾಗ ದಾರಕಟ್ಟಿದ ಜಾಗ ಬಿಳಿಯಾಗೇ ಉಳಿದು ಅದ್ದಿದ ಬಣ್ಣದ ನಡುವೆ ಸುಂದರ ಚಿತ್ತಾರ ಮೂಡಿಸುತ್ತದೆ. ಇಂಥ ಸೀರೆಗಳು, ಡ್ರೆಸ್ ಮೆಟೀರಿಯಲ್ ಗಳು ಕೊಳ್ಳುಗರನ್ನು ಮಂತ್ರಮುಗ್ಧಗೊಳಿಸುತ್ತವೆ.ಅಲ್ಲದೆ ಮೃದುವಾದ ಹತ್ತಿಬಟ್ಟೆಯ ಹೊದಿಕೆ - ಹಾಸುಗಳು, ಒಂಟೆಯ ಉಣ್ಣೆಯಿಂದ ತಯಾರಿಸಿದ ಅತ್ಯಂತ ಹಗುರವಾದ[೧೦೦ಗ್ರಾಮ್ ತೂಕ] ರಜಾಯಿಗಳು ,ಬಣ್ಣದ ಬಟ್ಟೆತುಂಡುಗಳನ್ನು ಕಲಾತ್ಮಕವಾಗಿ ಜೋಡಿಸಿ ತಯಾರಿಸಿದ ಕೌದಿಗಳನ್ನು ನೋಡಿದವರ ಜೇಬು ಖಾಲಿಯಾಗುವುದು ನಿಶ್ಚಿತ.ಜೊತೆಗೆ ಅಲಂಕಾರಿಕ ಬಿಳಿತಗಡಿನ ಕಿವಿಯೋಲೆಗಳು,ಡಾಬು,ಬಳೆಗಳ ಥಳಕಿನ ಜಗತ್ತು ಕಣ್ಣುಕುಕ್ಕುತ್ತದೆ. ಇಂಥ ವಸ್ತುಗಳನ್ನು ಬೆಂಗಳೂರಿನಲ್ಲಿ ಕಂಡಿದ್ದ ಎರಡರಷ್ಟು ದುಡ್ಡು ಕೊಟ್ಟು ಕೊಂಡಿದ್ದ ನನಗೆ  ಇಲ್ಲಿ ಇವುಗಳ ಬೆಲೆ ಕೇಳಿ ಅಚ್ಚರಿಯಾಯಿತು. ನೀವು ಶಾಪಿಂಗ್ ಖಯಾಲಿಯವರಾದರೆ ಜೈಸಲ್ಮೇರ್ ಗೆ ಹೋಗುವಾಗ ಖಾಲಿ ಚೀಲವನ್ನೂ, ಕೈತುಂಬಾ ಹಣವನ್ನು ಒಯ್ಯಲು ಮರೆಯದಿರಿ.ನಿಮ್ಮ ಹಣಕ್ಕೆ ಖಂಡಿತ ಮೋಸವಿಲ್ಲ.

ಇನ್ನೊಂದು ವಿಷಯ ಗೊತ್ತೇ ?ಇಲ್ಲಿನ ಜನ ಕಲ್ಲನ್ನು ಕೂಡ ಮಾರಬಲ್ಲ ಚಾಣಾಕ್ಷರು.’ ಹಬುರ್’ ಎಂಬ ಸ್ಥಳೀಯವಾಗಿ ಸಿಗುವ ಕಂದುಬಣ್ಣದಕಲ್ಲು ವಿಶ್ವಪ್ರಸಿದ್ಧ. ಈ ಕಲ್ಲು ಚೂರನ್ನು ಹಾಲಿನಲ್ಲಿ ಹಾಕಿದರೆ ಕೆಲ ಗಂಟೆಗಳಲ್ಲಿ ಮೊಸರು ಸಿದ್ಧ![ ಇದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳಿಂದ ಪ್ರತಿಪಾದಿಸಲ್ಪಟ್ಟಿದೆ- ವಿವರಗಳಿಗೆ- www.iisc.ernet.in/currsci/sep102005/729.pdf.].ಇದನ್ನು ದಿನವೂ ಕುಡಿಯುವ ನೀರಿನಲ್ಲಿ ಹಾಕಿ[ ಅಥವಾ ಈ ಲೋಟದಲ್ಲಿ ನೀರು ಹಾಕಿ] ೮ ಗಂಟೆಗಳ ಬಳಿಕ ಕುಡಿಯಿರಿ. ಮೂರುತಿಂಗಳಲ್ಲಿ ಸಂಧಿವಾತ, ಕೊಲಸ್ಟರಾಲ್, ಬಿ.ಪಿ ಗಳಿಂದ ಮುಕ್ತರಾಗಿ! ಹೀಗೆ ನಾನಾ ಗುಣವಿಶೇಷಗಳನ್ನು ಹೊತ್ತ ಹಬುರ್ ನ ಲೋಟಗಳು, ಪಾತ್ರೆಗಳು,ಪಿರಾಮಿಡ್ ಗಳು ಇಲ್ಲಿ ಲಭ್ಯ. ನಾನು ಕೂಡಾ ಲೋಟವೊಂದನ್ನು ತಂದಿದ್ದೇನೆ. ಮೊಸರಾಗುವುದು ನಿಜ.ಉಳಿದ ಈ ಕಾಯಿಲೆಗಳು ನನ್ನ ಸ್ನೇಹಿತರಲ್ಲ. ಆದ್ದರಿಂದ ಈ ಬಗ್ಗೆ ಏನೂ ಹೇಳಲಾರೆ.
                              ಮನಮೋಹಕ ಕೌದಿಗಳು
       
              

                                                    ಹಬುರ್ ಕಲ್ಲಿನಲೋಟ


ಜೈಸಲ್ಮೇರ್ ನ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ’ತ್ರಿಕೂಟಗೃಹ’ ಕೋಟೆ. ರಾಜಾ ಜಯಸಾಲನಿಂದ ೧೧೫೬ರಲ್ಲಿ ನಿರ್ಮಿತವಾದ ಈ ಕೋಟೆಯಿಂದಾಗಿಯೇ  ಜೈಸಲ್ಮೇರ್ ಎಂಬ ಹೆಸರು ಬಂದಿದೆ. ಮೇರು ಎಂದರೆ ಬೆಟ್ಟ. ಬೆಟ್ಟವೊಂದರ ಮೇಲೆ ಜಯಸಾಲನಿಂದ ಕಟ್ಟಲ್ಪಟ್ಟ ಕೋಟೆಯಿರುವ ಸ್ಥಳ ’ಜಯಸಾಲಮೇರು”  ಕಾಲಕ್ರಮೇಣ ಜೈಸಲ್ಮೇರ್  ಆಯಿತು. ಸಂಪೂರ್ಣವಾಗಿ ಹಳದಿಕಲ್ಲಿನಿಂದ ಕಟ್ಟಿದ ಈ ಕೋಟೆ ಭವ್ಯವಾಗಿದೆ.ಅರಮನೆಯನ್ನು ಸುಸ್ಥಿತಿಯಲ್ಲಿ ರಕ್ಷಿಸಲಾಗಿದೆ. ಒಳಗೆ ಪ್ರವೇಶಿಸಿದರೆ ಮುಂದಿನ ಬಾಗಿಲು ಕಾಣದಂತೆ ಜಿಗ್ ಜಾಗ್ ಮಾದರಿಯ ನಿರ್ಮಾಣದ ಹಿಂದೆ ಶತ್ರು ಅಕಸ್ಮಾತ್ ಪ್ರವೇಶಿಸಿದರೂ ಈ ಚಕ್ರವ್ಯೂಹದಿಂದ ಹೊರಬರಲಾಗದೇ ಕಂಗಾಲಾಗಲಿ ಎಂಬ ಉದ್ದೇಶವಿದೆ. ಭಾರತದ ಇತಿಹಾಸದಲ್ಲೇ ಯಾವುದೇ ರಾಜನಿಂದ ಆಕ್ರಮಣಕ್ಕೆ ಒಳಗಾಗದ ಕೋಟೆ ಎಂಬ ಹೆಗ್ಗಳಿಕೆ ಇದರದ್ದು.[ ಹನಿನೀರಿಲ್ಲದ ಈ ಪ್ರದೇಶದ ಮೇಲೆ ಯುದ್ಧಸಾರುವ ಭಂಡಧೈರ್ಯವನ್ನು ಯಾವ ಮೂರ್ಖರಾಜ ತಾನೇ ಮಾಡುತ್ತಾನೆ ಹೇಳಿ!]ಕೋಟೆಯ ಒಳಗೆ ನಿರ್ಮಿತವಾಗಿರುವ ಐದು ಬಾವಿಗಳಲ್ಲಿ ನೀರು ಕಂಡು ಆಶ್ಚರ್ಯವಾಯಿತು.ಈಗ ಬೆಳೆಯುತ್ತಿರುವ ಜನಸಂಖ್ಯೆಗೆ ಈ ಬಾವಿಗಳ ನೀರು ಸಾಲದಿರುವುದರಿಂದ ದೂರದ ಹಿಮಾಲಯದಿಂದ ಇಂದಿರಾಗಾಂಧಿ ಕಾಲುವೆಯ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಒಟ್ಟು ಜನಸಂಖ್ಯೆಯ ಕಾಲು ಭಾಗದಷ್ಟು ಜನ ಈಗಲೂ ಕೋಟೆಯೊಳಗೇ ವಾಸಿಸುತ್ತಿದ್ದಾರೆ. ಕೋಟೆಯೊಳಗೆ ಪ್ರವೇಶಿಸಿ ರಾಜನ ಅರಮನೆಯನ್ನು ನೋಡಿಕೊಂಡು ತುದಿಯನ್ನು ತಲುಪಿ  ದೃಷ್ಟಿಹಾಯಿಸಿದರೆ ಚಿನ್ನದ ಮರಳಿನ ನಡುವೆ ಚಿನ್ನದ ಬಣ್ಣದ ಕಲ್ಲುಕಟ್ಟಡಗಳಿಂದ ಕಂಗೊಳಿಸುವ ’ಗೋಲ್ಡನ್ ಸಿಟಿ’ ಎಂಬ ಹೆಸರು ಹೊತ್ತ ಜೈಸಲ್ಮೇರ್ ನ ವಿಹಂಗಮ ನೋಟವನ್ನು ಸವಿಯಬಹುದು.
        ಕೋಟೆಯ ಪಾರ್ಶ್ವದಿಂದ ಕಂಡ ನೋಟ
                                                                                      
 

ಜೈಸಲ್ಮೇರ್ ಗೆ ಉತ್ತಮವಾದ ಸಂಪರ್ಕವ್ಯವಸ್ಥೆ ಇದೆ. ೩೦೦ ಕಿ.ಮಿ ದೂರದ ಜೋಧ್ ಪುರದ ವರೆಗೆ ವಿಮಾನದಲ್ಲಿ ಹಾರಿ ನಂತರ ರೈಲು-ಬಸ್ಸುಗಳಲ್ಲಿ ಹೋಗಬಹುದು . ಅಲ್ಲದೇ ಎಲ್ಲ ಪ್ರಮುಖ ನಗರಗಳಿಂದ ರೈಲು-ಬಸ್ ವ್ಯವಸ್ಥೆ ಇದೆ. ಇನ್ನೂ ಸ್ಥಳೀಯ ಸಂಸ್ಕೃತಿ ಜೀವಂತವಾಗಿರುವ, ಮರುಭೂಮಿಯ ಜೀವನದ ಅನುಭವವನ್ನು ಕೊಡುವ ಜೈಸಲ್ಮೇರ್ ಗೆ ಒಮ್ಮೆ ಭೇಟಿ ಕೊಡುವುದನ್ನು ಮರೆಯಬೇಡಿ.



Tuesday, 6 September 2016

Tasmai shri gurave nama: - Teacher! I salute you

Lunch bell rang spreading a feeling of relief all around. I opened my lunch box. Cold upma loaded in the early morning stared at me reminding me that today is Sankashta Chaturthi*, my monthly fasting day. I glanced at my class 5 ‘E’ .Those bundles of energy were hurriedly emptying the lunch boxes. They wanted to make use of the golden time to just run around in the corridor, meet their bus friends from other classes, secretly exchange tattoos, talk about video-games, or plead the teacher for permission to go to the canteen- oh… what not? A colourful world with wonderful pleasures. Lucky souls, I thought.

Suddenly I noticed Abdul sitting in the third bench looking lost.
 I called to him and asked “Abdul did you have your lunch?” .
“No ma'am, I am fasting . It is Ramzan now” 
“Oh yes! But Ramzan fasting is for elders. You are too young.”
“Ma'am , Ramzan fasting is for all. My mother says we will understand the pain of the poor people only when we observe Roza. I eat only at dusk and at dawn for one month.” He spoke with beaming eyes and firm conviction.

As I continued with eating my upma, Abdul asked me “Ma'am, do you observe fast?”
I said “Yes, why not? I am fasting today. Today is Sankashta Chaturthi according to the  Indian calendar. For the whole day I observe fast. I mean.. I should not eat rice today. I eat dinner only after visiting the temple  you know… and…” .
Abdul interrupted, “But Ma'am, you are eating lunch now. This is not fasting.” 

He soon disappeared. The 6th period started and I moved to 7 C.

But his accusative eyes started following me all the time- in the bus, at home, at the dining table, and even in my dreams at times with a loud laugh. “Ma’am are you joking? I think you don’t know the meaning of fasting”. I brushed him aside from my thoughts. “Shut up! Fasting is about change of food. It is my culture. Who cares, my idea of fasting is different anyway…”

However, by the next Sankashta Chaturthi, I was tired of justifying myself. I decided to accept the challenge and make a difference in my lifestyle. It started with fruits and water. From dawn to night I managed with two bananas and plenty of water. I never felt tired. Next day morning when I woke up, I felt as if I were flying. With a holiday to my digestive system, it got toned up and there was pure pleasure in my mind. Now with each passing month  I eagerly wait for Sankashta Chaturthi my  fasting day.

Thank you Abdul, my teacher who taught me how to fast, who showed me the road to the precious wealth called HEALTH.

Every child is ‘special’ and each day in a teacher’s life is ‘extra special’ because it is full of countless number of Abduls armed with unique lessons.
  

*Sankashta Chaturthi is a day dedicated to Lord Ganesha. It is the 4th day after the full moon day of each lunar month . Hindus offer prayers to the lord and observe fast during the day, and will have dinner after seeing the moon at night. 



ಓ.. ಗಣಿತವೇ ... ನೀನೆಂಥ ನಿರ್ದಯಿ ?




ಮಾನ್ಯ ಪ್ರಾಚಾರ್ಯರಿಗೆ,

ನಿಮ್ಮ ಶಾಲೆಯ ೯ನೇ ತರಗತಿಯ ಡಿ ವಿಭಾಗದಲ್ಲಿ ಓದುತ್ತಿರುವ ವಿನಯ್ ರಾವ್ ನ ತಂದೆಯಾದ ನಾನು ವಿನಾಯಕ ರಾವ್ ಕೆಲವು ವಿಚಾರಗಳನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತಿದ್ದೇನೆ. ನನ್ನ ಮಗನು ಗಣಿತದಲ್ಲಿ ಅತಿ ಕಡಿಮೆ ಅಂಕಗಳನ್ನು ಪಡೆಯುತ್ತಿದ್ದಾನೆ. ಇದರಿಂದ ಅವನಿಗೆ ಶಾಲೆಗೆ ಬರುವ ಉತ್ಸಾಹವೇ ಇಂಗಿಹೋಗಿದೆ. ಅಲ್ಲದೆ ಅವನ ಗಣಿತಶಿಕ್ಷಕಿಯಿಂದ ಮಾನಸಿಕ ಒತ್ತಡಕ್ಕೂ ಒಳಗಾಗಿದ್ದಾನೆ. ನಿನ್ನೆ ವಿನಯನು ಗಣಿತದ ಮನೆಗೆಲಸ ಮಾಡಲಿಲ್ಲವೆಂದು ಅವರು ನೆಲದ ಮೇಲೆ ಅವನನ್ನು ಕುಳ್ಳಿರಿಸಿ ಲೆಕ್ಕಗಳನ್ನು ಮಾಡಿಸಿದ್ದರಿಂದ ಅವನಿಗೆ ಭಾರೀ ಅವಮಾನವಾಗಿದೆ. ಆದ್ದರಿಂದ ನೀವು ಆ ಗಣಿತಶಿಕ್ಷಕಿಯನ್ನು ಬದಲಿಸಿ ಅಥವಾ ನಾನು ವಿನಯನನ್ನು ಬೇರೆ ಶಾಲೆಗೆ ಸೇರಿಸಲು ನಿರ್ಧರಿಸಿದ್ದೇನೆ.
                                                                               ಇತಿ ತಮ್ಮ ವಿಶ್ವಾಸಿ

೯’ಡಿ’ ವಿಭಾಗದ ಕ್ಲಾಸ್ ಟೀಚರ್ ಆದ ನನ್ನೆದುರು ಈ ಪತ್ರವನ್ನು ಒಗೆದು ವಿಜಯದ ನಗೆ ಬೀರಿ ಹೋದ ವಿನಯನನ್ನು ಅಸಹಾಯಕತೆಯಿಂದ ದಿಟ್ಟಿಸುವುದನ್ನು ಬಿಟ್ಟರೆ ನಾನು ಬೇರೇನೂ ಮಾಡಲಾಗಲಿಲ್ಲ. ಪತ್ರವನ್ನು ತಲುಪಿಸಿ ಹೊರಬಂದ ನನ್ನ ಕಣ್ಮುಂದೆ ಮಕ್ಕಳ ಬಗ್ಗೆ ಅಪಾರ ಕಳಕಳಿಯುಳ್ಳ , ಸೊಗಸಾಗಿ ಗಣಿತವನ್ನು ಬೋಧಿಸುವ ಆ ಶಿಕ್ಷಕಿಯೂ, ಮಗನ ಮೇಲಿನ ಕುರುಡುಪ್ರೇಮದಿಂದಲೋ ಅಥವಾ ಬೇರೆ ಒತ್ತಡದಿಂದಲೋ ಪತ್ರ ಬರೆದ ತಂದೆಯೂ, ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳೂ, ಇಂತಹ ಸುದ್ದಿಗಾಗಿ ಹಾತೊರೆಯುವ ಮಾಧ್ಯಮಗಳೂ ಸರದಿಯ ಸಾಲಿನಲ್ಲಿ ಮೆರವಣಿಗೆ ನಡೆಸಿದವು. ಕೆಲವೇ ನಿಮಿಷಗಳಲ್ಲಿ ಪ್ರಿನ್ಸಿಪಾಲರ ಕೊಠಡಿಯಿಂದ ಸಪ್ಪೆ ಮೋರೆ ಹಾಕಿಕೊಂಡು ಹೊರಬಂದ ಆ ನನ್ನ ಸಹೋದ್ಯೋಗಿಯನ್ನು ಕಂಡು ಮನಸ್ಸು ರಾಡಿಯಾಯಿತು.

ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ನಮಗೆ ವಾಮನಡೋಂಗ್ರೆ ಎಂಬ ಗಣಿತಶಿಕ್ಷಕರಿದ್ದರು. “ತೆಗೆ ತೆಗೆ ಗಣಿತದ ನೂತನ ಲೋಕ” ಎನ್ನುತ್ತಾ ತರಗತಿಗೆ ಬರುತ್ತಿದ್ದ ಅವರನ್ನು ಕಂಡೊಡನೆ ನನಗೆ ತಳಮಳ ಆರಂಭ.ಅವರೇನೋ ಚೆನ್ನಾಗಿಯೇ ಹೇಳಿಕೊಡುತ್ತಿದ್ದರು. ಆದರೆ ಬೇರೆ ವಿಷಯಗಳಲ್ಲಿ ಜಾಣೆಯಾಗಿದ್ದ ನನಗೆ ವೇಗವಾಗಿ ಲೆಕ್ಕಗಳನ್ನು ಬಿಡಿಸಲು ಆಗುತ್ತಿರಲಿಲ್ಲ. ಅವರು ಬೋರ್ಡನ ಮೇಲೆ ಲೆಕ್ಕವನ್ನು ಬರೆದು ತಿರುಗುತ್ತಿದ್ದಂತೆಯೇ ನಮ್ಮ ತರಗತಿಯಲ್ಲಿದ್ದ ವಿವೇಕಾನಂದ ಜೋಶಿ, ಜೈಶಂಕರ ಮರಾಠೆ, ಸುಧಾಕರ ಪೂಜಾರಿ ಇತ್ಯಾದಿಯಾದ ಅನೇಕ ಬೃಹಸ್ಪತಿಗಳು ಸಾರ್.... ಬಂತು ....ಉತ್ತರ ಬಂತು...  ಅಂತ ಗೆಲುವಿನ ಕೇಕೆ ಹಾಕುತ್ತಿದ್ದರು. ನನಗಂತೂ ಆ ಕ್ಷಣದಲ್ಲಿ ಅವರನ್ನು ಕಂಡರೆ ಕೆಂಡದಂಥ ಕೋಪದ ಜೊತೆ ಅಳುವೂ ಬರುತ್ತಿತ್ತು. ಅತ್ಯಂತ ಸ್ನೇಹಪರರೂ, ಹಸನ್ಮುಖಿಗಳೂ ಆದ ಆ ನನ್ನ ಸಹಪಾಠಿಗಳು ಗಣಿತದ ತರಗತಿಯಲ್ಲಿ ಮಾತ್ರ ಅಕ್ಷರಶ: ನನ್ನ ಶತ್ರುಗಳು!!. ಮುಂದೆ ಹೈಸ್ಕೂಲಿನಲ್ಲೂ ವನಮಾಲಾ ಟೀಚರ್ ಎಂಬ ಕರುಣಾಮೂರ್ತಿಯಾದ ಶಿಕ್ಷಕಿ ಇದ್ದರೂ ಯಾಕೋ ಗಣಿತವೆಂದರೆ ಕಷ್ಟ-ಭಯ.ಜೊತೆಗೆ ರೋಶನ್ ಪಾಯಿಸ್, ಜಗನ್ನಾಥ ಶೇರಿಗಾರ್, ಸಂಧ್ಯಾ ಕಾಮತ್ ಮುಂತಾದ ಗಣಿತಬ್ರಹ್ಮರು ಕ್ಷಣಮಾತ್ರದಲ್ಲಿ ಲೆಕ್ಕ ಬಿಡಿಸಿ ನನ್ನನ್ನು ಅಸೂಯೆ-ದು:ಖಗಳೆಂಬ ನರಕಕ್ಕೆ ತಳ್ಳುತ್ತಿದ್ದರು. ನಮ್ಮ ಕ್ಲಾಸಿನ ಹೆಚ್ಚಿನ ಮಕ್ಕಳು ಗಣಿತದಲ್ಲಿ ಫೇಲ್ ಆಗಿ ಅಳುತ್ತಿದ್ದರೆ, ನಮ್ಮ ಜೊತೆ ಅಸಹಾಯಕ ಟೀಚರ್ ಕೂಡಾ ಭಾಗಿಯಾಗುತ್ತಿದ್ದರು.
ಕಾಲ ಉರುಳಿದೆ.ಆದರೆ ಗಣಿತವೆಂಬ ಹುಲಿ ಇಂದೂ ಗರ್ಜಿಸುತ್ತಲೇ ಇದೆ. ಸರಿ...ಗರ್ಜನೆಯಡಗಿಸಲು ಸುಸಜ್ಜಿತಶಾಲೆ - ಪರಿಣತಶಿಕ್ಷಕರೇ ಪರಿಹಾರವೆಂದಾದರೆ ನಗರದ ಅತ್ಯಾಧುನಿಕ ಶಾಲೆಗಳಲ್ಲಿ ಗಣಿತ ಸಮಸ್ಯೆಯಾಗಬಾರದಾಗಿತ್ತು. ಯಾಕೆಂದರೆ ಇಲ್ಲಿ ವೈಜ್ಞಾನಿಕ ನೆಲೆಯಲ್ಲಿ ಪಾಠಗಳು ನಡೆಯುತ್ತವೆ.ಇಲ್ಲಿನ ಮಕ್ಕಳಿಗೆ ವಿದ್ಯಾವಂತ ಪಾಲಕರಿದ್ದಾರೆ, ಸಹಾಯಕ್ಕೆ ಟ್ಯೂಶನ್ ಕ್ಲಾಸ್ ಗಳಿವೆ, ಅಂತರ್ಜಾಲವಿದೆ. ಆದರೂ ಇಲ್ಲಿ ಇದೊಂದು ಭೀಕರಸಮಸ್ಯೆ. ಇಂಥ ಒಂದು ಶಾಲೆಯಲ್ಲಿ ಕೆಲಸ ಮಾಡುವ ನನ್ನ ಅನುಭವವನ್ನು ಈಗಾಗಲೇ ನೀವು ಓದಿದ್ದೀರಿ.ಇರಲಿ.. ನಗರದ ಪಾಲಕರಂತೂ ಕೆಲಸದ ಮಧ್ಯೆ ಮಕ್ಕಳಿಗೆ ಗಮನಕೊಡದವರು, ಸದಾ ಬಿಜಿ ಜನ... ಅದಕ್ಕೇ ಹೀಗೆ... ಎಂದಾದರೆ ಹಳ್ಳಿಗಳಲ್ಲಿ ತಂದೆ-ತಾಯಿ , ಅಜ್ಜ- ಅಜ್ಜಿಯ ಪ್ರೀತಿಯಲ್ಲಿ ಬೆಳೆಯುತ್ತಾ ಒತ್ತಡವಿಲ್ಲದೆ ಬದುಕುವ ಮಕ್ಕಳಿಗೂ ಗಣಿತ ಕೈಲಾಗದು.ಅವರಿಗೂ ಅದೊಂದು ಘೋರನರಕ.
                                   
ನನ್ನ ಮಿತ್ರರೊಬ್ಬರ ಪ್ರಕಾರ ಗಣಿತದ ಸ್ವರೂಪವೇ ಅರ್ಥಮಾಡಿಕೊಳ್ಳಲು ಕಠಿಣ. ಗಣಿತವನ್ನು ಬಿಡಿಸಲು ತರ್ಕಬದ್ಧ ಚಿಂತನೆಯ ಅವಶ್ಯಕತೆ ಇದೆ. ಜನ್ಮದತ್ತವಾಗಿ ಬರಬೇಕಾದ ಬುದ್ಧಿವಂತಿಕೆ ಬೇಕು.ಇಂಥ ಕೆಲವೇ ಪುಣ್ಯವಂತರಿಗೆ ಗಣಿತವೊಂದು ಗೆಳೆಯ.ಆದರೆ ಭಾವನಾತ್ಮಕ ಸ್ವಭಾವದ ವಿದ್ಯಾರ್ಥಿಗಳಿಗೆ,ಸಾಮಾನ್ಯ ಬುದ್ಧಿಮತ್ತೆಯವರಿಗೆ ಲೆಕ್ಕವನ್ನು ಓದಿ ಅರ್ಥ ಮಾಡಿಕೊಂಡು ,ಗೋಜಲನ್ನು ಬಿಡಿಸಲು ಮೆದುಳು ಸಹಕರಿಸುವುದಿಲ್ಲ. ಕೆಲವು ಲೆಕ್ಕಗಳನ್ನು ಮತ್ತೆ ಮತ್ತೆ ಓದಿ ಮಾಡಿದರೂ,ಹೊಸ ಸಮಸ್ಯೆ ಬಂದಾಗ ಯೋಚಿಸುವಲ್ಲಿ ಇವರು ಸೋಲುತ್ತಾರೆ. ಅವರಿಗದು ಬರುಡು,ರಸಹೀನ ಎನಿಸುತ್ತದೆ. ಆದರೆ ನಮ್ಮ ವ್ಯವಸ್ಥೆ ಅವರನ್ನು ಬಿಡಬೇಕಲ್ಲ.... ನಮ್ಮ ಪಠ್ಯಕ್ರಮದಂತೆ ಹತ್ತನೇ ತರಗತಿಯವರೆಗೆ ಗಣಿತದಿಂದ ಬಿಡುಗಡೆ ಇಲ್ಲ. ಮುಂದೆ ಕೈತುಂಬ ಸಂಬಳ ಬರುವ ಕೆಲಸಗಳಿಗೆ ಸೇರಲು ಓದಬೇಕಾದ ಕೋರ್ಸ್ಗಳಿಗೆ ಸಿ.ಇ.ಟಿ ಯನ್ನು ಪಾಸ್ ಮಾಡಬೇಕು. ಅದಕ್ಕೆ ಗಣಿತ ಬೇಕೇ ಬೇಕು.... ಅಂತೂ ಈ ಭಾವನಾಜೀವಿಗಳೆಂಬ ನತದೃಷ್ಟರಿಗೆ ಅಥವಾ ಸರಳವಾದ ಭಾಷೆಯಲ್ಲಿ ದಡ್ಡರಿಗೆ ಗಣಿತ ಪೆಡಂಭೂತವಾಗಿ ಕಾಡುತ್ತಲೇ ಇರುತ್ತದೆ.
ಸಮಸ್ಯೆಯ ಇನ್ನೊಂದು ಮುಖವೆಂದರೆ ಗಣಿತದ ಪ್ರಶ್ನಪತ್ರಿಕೆ. ಕೆಲ ವರ್ಷಗಳ ಹಿಂದೆ ಪಾಠಪುಸ್ತಕದ ’ಅಭ್ಯಾಸಗಳು’ ವಿಭಾಗದಿಂದಲೇ ಹೆಚ್ಚಿನ ಪ್ರಶ್ನೆಗಳು ಪರೀಕ್ಷೆಯಲ್ಲಿ ಬರುತ್ತಿದ್ದವು. ಆದ್ದರಿಂದ ಸಾಧಾರಣ ಬುದ್ಧಿವಂತಿಕೆ ಇದ್ದವರೂ ಕೂಡಾ  ಚೆನ್ನಾಗಿ ಅಭ್ಯಾಸ ಮಾಡಿ, ಬೇಕಿದ್ದರೆ ಉರು ಹೊಡೆದು ಪರೀಕ್ಷೆಯಲ್ಲಿ ಪಾಸ್ ಆಗಿ ನಿಟ್ಟುಸಿರು ಬಿಡುತ್ತಿದ್ದರು. ಆದರೆ ಈಗಿನ ವಿದ್ಯಮಾನ ನಿಮಗೆ ಗೊತ್ತೇ? ಈಗಿನ ಗಣಿತದ ಪ್ರಶ್ನಪತ್ರಿಕೆಯ ತುಂಬ ತತ್ತ್ವಾಧಾರಿತ, ಪ್ರಯೋಗಾಧಾರಿತ [conceptual/application based] ಪ್ರಶ್ನೆಗಳು!.ನಮ್ಮ ಶಾಲೆಯಲ್ಲಿ ಮಾಥ್ಸ್ ಟೀಚರ್ಸು ಹೈ ಸ್ಟಾಂಡರ್ಡ್..ಎಂದು ಹೇಳಿಕೊಳ್ಳಲು ಶಾಲೆಗಳ ನಡುವೆ ಪೈಪೋಟಿ. ಸಾಧಾರಣ ಬುದ್ಧಿಮತ್ತೆಯ ವಿದ್ಯಾರ್ಥಿ ಲೆಕ್ಕ ಬಿಡಿಸುವುದಿರಲಿ, ಆ ಪ್ರಶ್ನೆಗಳನ್ನು ಓದಿ ಅರ್ಥಮಾಡಿಕೊಳ್ಳುವುದಕ್ಕೇ ಹರಸಾಹಸಪಡುತ್ತಾನೆ.ಪರಿಣಾಮ ಕನಿಷ್ಠ ಅಂಕಗಳು... ನಿರಾಸೆ... ಪಾಲಕರ ಅಸಹನೆ.... ಕಷ್ಟಗಳವಿಷವರ್ತುಲ ಆರಂಭವಾಗುತ್ತದೆ. 

ಇನ್ನೊಂದು ಆಯಾಮವೆಂದರೆ ಗಣಿತದ ಭಯ ನಮ್ಮಲ್ಲಿ ಆಳವಾಗಿ ಬೇರೂರಿದೆ. ಮನೆಯಲ್ಲಿ ತಂದೆತಾಯಿಯರು ಬಾಲ್ಯದಿಂದಲೇ ಅಯ್ಯಯ್ಯೋ..... ಗಣಿತ ಕಷ್ಟ ಮರೀ.... ಎನ್ನುತ್ತಾ ಭಯದ ಬೀಜ ಬಿತ್ತುತ್ತಾರೆ.ಪರೀಕ್ಷೆಯ ಅಂಕಗಳು ಬಂದಾಗಲೂ ಮಾಥ್ಸ್ ನಲ್ಲಿ ಯಾಕಿಷ್ಟು ಕಮ್ಮಿ?.. ಎಂದು ಪ್ರಾಣ ತಿನ್ನುತ್ತಾರೆ. ಅಥವಾ ಪ್ರಶ್ನಪತ್ರಿಕೆ ನೋಡಿ ಅಲ್ಲಾ... ನಮಗೇ ಈ ಪ್ರಶ್ನೆಗಳು ಅರ್ಥವಾಗಲ್ಲ... ಪಾಪ ಮಗು ... ಹೇಗೆ ಮಾಡಬೇಕು.. ಎಂದು ಅನುಕಂಪ ತೋರಿಸಿ ಗಣಿತದ ಗುಮ್ಮನಿಗೆ ನೀರು-ಗೊಬ್ಬರ ಹಾಕುತ್ತಾರೆ. ಅದಕ್ಕೆ ಸರಿಯಾಗಿ ಹೆಚ್ಚಿನ ಶಾಲೆಗಳಲ್ಲಿ ಗಣಿತವನ್ನು ನೀರಸವಾಗಿ ಬೋಧಿಸಿ ಮಗು ಅದರಿಂದ ವಿಮುಖನಾಗುವಂತೆ ಕೈಲಾದ ಸಹಾಯ ಮಾಡುತ್ತಾರೆ. ನಮ್ಮ ಗಣಿತಪಠ್ಯಪುಸ್ತಕಗಳ ವಿಷಯಗಳೂ ಆಸಕ್ತಿಯನ್ನು ಕೆರಳಿಸುವಂತಿಲ್ಲ. ಅಲ್ ಜೀಬ್ರಾದ ಎಕ್ಸ್, ವೈಗಳನ್ನು ನಿಜಜೀವನದಲ್ಲಿ ಹುಡುಕುತ್ತಾ...ಜ್ಯಾಮಿತಿಯ ಕೋನಗಳಲ್ಲಿ ಮೂಲೆಗುಂಪಾಗುತ್ತಾ, ನಾಚುರಲ್ - ಪ್ರೈಮ್- ರಾಷನಲ್ ನಂಬರುಗಳ ಮಧ್ಯೆ ವಿದ್ಯಾರ್ಥಿಯ ಕಳೆದುಹೋಗುತ್ತಾನೆ
.
ಪ್ರಪಂಚಕ್ಕೆ ಸೊನ್ನೆಯನ್ನು ಕೊಟ್ಟವರೆಂದು, ಪೈ ಬೆಲೆಯನ್ನು ನಿರ್ಧರಿಸಿದವರೆಂದು, ಖಗೋಳದ ವಿದ್ಯಮಾನಗಳನ್ನು ಗಣಿತದ ಮೂಲಕ ವ್ಯಾಖ್ಯಾನಿಸಿದವರು ನಾವೆಂದು ಹೆಮ್ಮೆಪಡುವ ಭಾರತೀಯರು ನಾವು. ಆದರೆ ಇಂದಿಗೂ ಭಾರತೀಯ ಮಗುವಿಗೆ ಗಣಿತವೊಂದು ಕಬ್ಬಿಣದ ಕಡಲೆ. ಗಣಿತದ ಭಯದಿಂದ ಶಾಲೆ ತೊರೆದವರ, ಮನೆ ಬಿಟ್ಟು ಓಡಿಹೋದವರ ಅಸಂಖ್ಯ ಉದಾಹರಣೆಗಳು ನಮ್ಮಲ್ಲಿವೆ. ಕೆಲವೇ ದಿನಗಳ ಹಿಂದೆ ಗಣಿತದಲ್ಲಿ ಕಡಿಮೆ ಅಂಕಗಳು ಬಂದವೆಂದು ೯ನೇ ಮಹಡಿಯ ಮನೆಯ ಬಾಲ್ಕನಿಯಿಂದ ಹಾರಿ ಪ್ರಾಣ ತ್ಯಜಿಸಿದ ವಿದ್ಯಾರ್ಥಿ, ಮನೆಯಿಂದ ಓಡಿಹೋಗಿ ೪ ದಿನ ತಲ್ಲಣ ಸೃಷ್ಟಿಸಿದ್ದ ಬಾಲಕಿ, ಆ ಸಂಖ್ಯೆ ಇಂದೂ ಮುಂದುವರೆಯುತ್ತಿರುವುದರ ಸಂಕೇತಗಳು.ಅಂದರೆ ನಮ್ಮ ತಪ್ಪುಗಳಿಂದ ನಾವು ಪಾಠ ಕಲಿತಿಲ್ಲವೇ? ನಮ್ಮ ಗಣಿತದ ಪಠ್ಯಕ್ರಮವನ್ನು, ಕನಿಷ್ಟ ಪಕ್ಷ ಹತ್ತನೇ ತರಗತಿಯವರೆಗಿನ ಪಠ್ಯವನ್ನಾದರೂ ಮಕ್ಕಳ ಮನಸ್ಸನ್ನು ಅರಳುವಂತೆ ವಿನ್ಯಾಸಗೊಳಿಸಬಹುದೇ?ನಮ್ಮ ಕಲಿಸುವ ವಿಧಾನ ನೀರಸವಾಗಿದೆಯೇ? ಅಥವಾ ನಮ್ಮ ಪರೀಕ್ಷೆಗಳ ಮಾದರಿ ಬದಲಾಗಬೇಕೇ? ಪ್ರಕೃತಿಯಲ್ಲಿ, ಸಂಗೀತದಲ್ಲಿ, ನೃತ್ಯದಲ್ಲಿ, ಚಿತ್ರಗಳಲ್ಲಿ, ಭಾಷೆಗಳಲ್ಲಿ,ಕ್ರೀಡೆಗಳಲ್ಲಿ, ಕಾವ್ಯದಲ್ಲಿ ಅಷ್ಟೇ ಏಕೆ ಪ್ರಮಾಣಬದ್ಧವಾಗಿ ಸೃಷ್ಟಿಯಾದ ನಮ್ಮ ದೇಹದಲ್ಲೂ ಇರುವ ಗಣಿತವನ್ನು ಮಗು ಖುಷಿಯಿಂದ ಕಲಿಯುವಂತೆ ನೋಡುವಲ್ಲಿ ನಾವೇಕೆ ದಯನೀಯವಾಗಿ ಸೋತಿದ್ದೇವೆ? 

ಮೈತುಂಬಾ ಪ್ರಶ್ನೆಗಳನ್ನೇ ಹೊದ್ದಿರುವ ಗಣಿತವೇ ..ನೀನೇಕೆ ಇಂಥ ಕ್ರೂರಿ?